ಬೆಂಗಳೂರು: ನಂದಿನಿ ಲೇಔಟ್ನ ಕಂಠೀರವ ನಗರದಲ್ಲಿ ಹಲವು ವರ್ಷಗಳಿಂದ ವಾಸಿಸುತ್ತಿರುವ 27 ಕುಟುಂಬಗಳಿಗೆ ಇಂದು ಅವರು ವಾಸಿಸುತ್ತಿರುವ ಜಾಗದ ಹಕ್ಕುಪತ್ರಗಳನ್ನು ಸ್ಥಳೀಯ ಶಾಸಕ ಗೋಪಾಲಯ್ಯ ವಿತರಿಸಿದರು.
ಹಕ್ಕುಪತ್ರಗಳನ್ನು ಸ್ವೀಕರಿಸಿದ ಕುಟುಂಬಗಳಿಗೆ ಶುಭ ಹಾರೈಸಿದ ಶಾಸಕ ಗೋಪಾಲಯ್ಯ, ಈ ಜಾಗಗಳು ಬಹಳ ಬೆಲೆಬಾಳುವವು ಎಂಬುದನ್ನು ಗಮನದಲ್ಲಿಟ್ಟುಕೊಂಡು ಅವನ್ನು ಮಾರಿಕೊಳ್ಳಬಾರದು ಎಂದು ವಿಶೇಷವಾಗಿ ತಾಕೀತು ಮಾಡಿದರು.
ಅನೇಕ ವರ್ಷಗಳಿಂದ ಮನೆ ನಿರ್ಮಿಸಿ ವಾಸಿಸುತ್ತಿದ್ದರೂ ಕಾನೂನುಬದ್ಧ ದಾಖಲೆಗಳಿಲ್ಲದೆ ಸಂಕಷ್ಟ ಅನುಭವಿಸುತ್ತಿದ್ದ ಕುಟುಂಬಗಳಿಗೆ ಸರ್ಕಾರದ ಈ ಕ್ರಮದಿಂದ ದೊಡ್ಡ ನೆಮ್ಮದಿ ದೊರೆತಿದೆ ಎಂದು ನಿವಾಸಿಗಳು ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರು, ಅಧಿಕಾರಿಗಳು ಹಾಗೂ ನಿವಾಸಿಗಳು ಉಪಸ್ಥಿತರಿದ್ದರು.




